Monday, March 7, 2011

ತಂಗಾಳಿಯಂತೆ ಬಾಳಲ್ಲಿ ಬಂದೆ

ಹಾಡು: ತಂಗಾಳಿಯಂತೆ ಬಾಳಲ್ಲಿ ಬಂದೆ / tangaaliyante baalalli bande
ಚಿತ್ರ: ಗುರಿ (1987) / guri
ಹಾಡಿದವರು: ಡಾ || ರಾಜ್ ಕುಮಾರ್ ಮತ್ತು ರತ್ನಮಾಲ ಪ್ರಕಾಶ್
ಸಾಹಿತ್ಯ: ಚಿ || ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ

ಈ ಹಾಡನ್ನು ಇಲ್ಲಿ ನೋಡಿ: https://www.youtube.com/watch?v=lxIsgUqsRPM

ರಾಜ್: ಎ.. ಹೆ..ಹೆ
ರತ್ನ: ತನನಮ್..ತನನಮ್..
ರಾಜ್: ಅ..ಹ..ಹ
ರತ್ನ: ಅ..ಹ..ಹ
ರಾಜ್: ತನನಮ್...
ರತ್ನ: ಅ..ಹ..ಹ
ರಾಜ್: ಒ..ಹೊ
ರತ್ನ: ಅ..ಹ..
ಇಬ್ಬರು: ತನನಮ್..ತನನಮ್..

ರಾಜ್: ತಂಗಾಳಿಯಂತೆ ಬಾಳಲ್ಲಿ ಬಂದೆ ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ, ಬದುಕಲ್ಲಿ ಎಕಾಂಗಿಯಾದಾಗ

ರತ್ನ: ಅನುರಾಗವೇನೋ, ಅನಂದವೇನೋ
ಅನುರಾಗವೇನೋ..ಓ.., ಅನಂದವೇನೋ...
ಹೊಸ ಹೊಸ ಸವಿನುಡಿಯಲಿ ನಿ ತಿಳಿಸಿದೆ

ರತ್ನ: ತಂಗಾಳಿಯಂತೆ ಬಾಳಲ್ಲಿ ಬಂದೆ ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ, ಬದುಕಲ್ಲಿ ಎಕಾಂಗಿಯಾದಾಗ

ರಾಜ್: ಒಣಗಿದ ಹು ಬಳ್ಳಿ ಹಸಿರಾಯಿತು, ಸೊರಗಿದ ಮರಿದುಂಬಿ ಸ್ವರ ಹಾಡಿತು..
ಹೋಸ ಜೀವ ಬಂದಂತೆ ಹಾರಾಡಿತು..

ರತ್ನ: ಎದೆಯಲಿ ನೂರಾಸೆ ಉಸಿರಾಡಿತು, ಹೊಸತನ ಬೇಕೆಂದು ಹಾರಾಡಿತು..
ಕನಸನ್ನು ಕಂಡಂತೆ ಕುಣಿಡಾಡಿತು..

ರಾಜ್: ಜೀವಕೆ ಹಿತವಾಯಿತು ಅಮೃತ ಕುಡಿದಂತೆ, ಸ್ವರ್ಗವ ಕಂಡಂತೆ..

ರತ್ನ: ತಂಗಾಳಿಯಂತೆ ಬಾಳಲ್ಲಿ ಬಂದೆ

ರಾಜ್: ಸಂಗೀತದಂತೆ ಸಂತೋಷ ತಂದೆ

ರತ್ನ: ಬೆಳಕಿಂದ ನಾ ದೂರವಾದಾಗ

ರಾಜ್: ಬದುಕಲ್ಲಿ ಎಕಾಂಗಿಯಾದಾಗ

ರತ್ನ: ಮಳೆಯಲಿ ಮಿಂಚೊಂದು ಸುಳಿದಾಡಿತು, ಚಳಿಯಲಿ ನವಿಲೊಂದು ಗರಿ ಬಿಚ್ಚಿತು..
ಹೊಸ ಲೋಕ ಕಂಡಂತೆ ನಲಿದಾಡಿತು..ಉ..

ರಾಜ್: ಮನಸಿನ ನೋವೆಲ್ಲ ದೂರಾಯಿತು, ಒಲವಿನ ಹಾಡೊಂದು ಸುಳಿದಾಡಿತು
ಕವಿಯಂತೆ ಮಾತಾಡೋ ಮನಸಾಯಿತು..

ರತ್ನ : ಜೀವನ ಜೇನಾಯಿತು.. ನೋವನು ಮರೆತಂತೆ, ಸಂಭ್ರಮ ಬೆರೆತಂತೆ..

ರಾಜ್: ತಂಗಾಳಿಯಂತೆ ಬಾಳಲ್ಲಿ ಬಂದೆ

ರತ್ನ: ಸಂಗೀತದಂತೆ ಸಂತೋಷ ತಂದೆ

ರಾಜ್: ಬೆಳಕಿಂದ ನಾ ದೂರವಾದಾಗ

ರತ್ನ: ಬದುಕಲ್ಲಿ ಎಕಾಂಗಿಯಾದಾಗ

ರಾಜ್: ಅನುರಾಗವೇನೊ, ಅನಂದವೇನೊ..
ಹೊಸ ಹೊಸ ಸವಿನುಡಿಯಲಿ ನಿ ತಿಳಿಸಿದೆ..

ರತ್ನ: ತಂಗಾಳಿಯಂತೆ

ರಾಜ್: ಬಾಳಲ್ಲಿ ಬಂದೆ

ರತ್ನ: ಸಂಗೀತದಂತೆ

ರಾಜ್: ಸಂತೋಷ ತಂದೆ

ರಾಜ್/ರತ್ನ: ಬೆಳಕಿಂದ ನಾ ದೂರವಾದಾಗ, ಬದುಕಲ್ಲಿ ಎಕಾಂಗಿಯಾದಾಗ

1 comment:

Anonymous said...

Super Kannada song

ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ

ಹಾಡು: ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ / Guhanalli Sodara Vaathsalya Kande ಚಿತ್ರ: ಹೇಮಾವತಿ / Hemavathi [1977] ಗಾಯಕರು: ಪಿ.ಬಿ. ಶ್ರೀನಿವಾಸ್   ಸಾಹಿತ್ಯ:...